Koogidaru dhwani kelade bhajan lyrics in Kannada

ಕೂಗಿದರು ಧ್ವನಿ ಕೇಳದೆ
ಶಿರ ಬಾಗಿದರು ದಯ ಬಾರದೆ |
ಭೋಗಿಶಯನ ಭುವನಾಧಿಪತೇ ನಿನ್ನ
ಆಗಮನವೆಂದಿಗೆ ಆಗುವುದು ಪ್ರಭೋ || ಪ ||

ಭಕ್ತರಿಗೊಲಿದವ ನೀನು ಖರೆ
ಎನ್ನತ್ತ ನೋಡುವುದು ನೀನು ದೊರೆ |
ಚಿತ್ತವಧಾನ ಪರಾಕು ಮಹಾಪ್ರಭು
ಎತ್ತಣ ರಥವನು ಎತ್ತಿ ಬಾ ನೀಡು ದೊರೆ || 1 ||

ಸಿಂಧುಶಯನ ಶೇಷಾದ್ರಿ ವರ
ಸಿರಿ ಮಂದಿರ ಭಕ್ತ ಕುಟುಂಬಧರ |
ಸುಂದರ ಮೂರುತಿ ಒಂದಿನ ಸ್ವಪ್ನದಿ
ಬಂದು ಪದದ್ವಯ ಚಂದದಿ ತೋರಿಸೋ || 2 ||

ಕರುಣಾ ಶರಧಿಯು ನೀನಲ್ಲವೇ ಕೃಷ್ಣ
ಶರಣಾಗತರಿಗೆ ದೊರೆಯಲ್ಲವೆ |
ಮೊರೆಹೊಕ್ಕವರಿಗೆ ಮರೆಯಾಗುವರೆ
ಸರಿಯೇ ಜಗದೊಳು ವಿಜಯ ವಿಠ್ಠಲರೇಯಾ || 3 ||