Ondu bari smarane salade Bhajan Lyrics in Kannada

ಒಂದು ಬಾರಿ ಸ್ಮರಣೆ ಸಾಲದೆ
ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ || ಪ ||

ಹಿಂದನೇಕ ಜನ್ಮದಲ್ಲಿ ನೊಂದು ಯೋನಿಯಲ್ಲಿ ಬಂದು |
ಇಂದಿರೇಶನ ಪಾದವನ್ನು ಹೊಂದಬೇಕೆಂಬುವರಿಗೆ || ೧ ||

ಆರುಮಂದಿ ವೈರಿಗಳನು ಸೇರಲಿಸದಂತೆ ನೂಕಿ |
ಧೀರನಾದ ಹರಿಯ ಪಾದ ಸೇರಬೇಕೆಂಬುವರಿಗೆ || ೨ ||

ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು |
ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ || ೩ ||

ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ |
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ || ೪ ||

ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು |
ತಾನು ಬದುಕಲಾರದಿರಲು ತೋರಿ ಕೊಟ್ಟ ಮಧ್ವಮುನಿಯ || ೫ ||